ರಾಮದಾಸ ನಾಯ್ಡು ಅವರಿಗೆ ರಾಜ್ಯ ಪ್ರಶಸ್ತಿ
Posted date: 08 Wed, Oct 2014 – 10:14:21 AM

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಪಿ.ಆರ್.ರಾಮದಾಸ ನಾಯ್ಡು ಅವರದು ಚಿರಪರಿಚಿತ ಹೆಸರು. ಚಿತ್ರ ನಿರ್ದೇಶಕರಾಗಿ ಈಗಾಗಲೇ ಅವರು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈಗ ೨೦೧೨ರ ಸಾಲಿನ ಕರ್ನಾಟಕ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಅವರು ರಚಿಸಿರುವ ‘ವಿಶ್ವ ಸಿನಿಮಾ - ಮಾತು ಬರುವ ತನಕ‘ ಕೃತಿಗೆ ದೊರಕಿದೆ.
ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ವಾರ್ತಾ ಇಲಾಖೆಯ ವಿಷುಕುಮಾರ್ ಅವರು ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಪಿ.ರಾಮದಾಸ ನಾಯ್ಡು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಪಿ.ರಾಮದಾಸ ನಾಯ್ಡು ಅವರು ಪ್ರವಾಹ, ಮುಸ್ಸಂಜೆ, ಮೊಗ್ಗಿನ ಜಡೆ, ಬೇಲಿ ಮತ್ತು ಹೊಲ, ಹೆಜ್ಜೆಗಳು ಚಿತ್ರಗಳನ್ನು ನಿರ್ದೇಶನ ಮಾಡಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪಡೆದಿರುವರು. ಇವರು ಟಿವಿ ಕ್ಷೇತ್ರದಲ್ಲೂ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed